‌‌ಪ್ರತಿ ಸೋಮವಾರದಂತೆ ಇಂದು ದರ್ಶನ್‌ರನ್ನು ಭೇಟಿಯಾದ ವಿಜಯಲಕ್ಷ್ಮೀ, ಮಗ ವಿನೀಶ್

Sampriya

ಸೋಮವಾರ, 19 ಆಗಸ್ಟ್ 2024 (14:20 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅವರು ಜೈಲು ಸೇರಿ 2ತಿಂಗಳು ಕಳೆದಿದ್ದು, ಇಂದು ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಅವರು ಜೈಲಿಗೆ ಭೇಟಿ ನೀಡಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮೀ ಅವರು ಸತತ 8 ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ಇನ್ನೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಗಳನ್ನು ಪೊಲೀಸರು ವಶಪಡಿಸಿಕೊಂಡು, ತನಿಖೆ ಚುರುಕುಮಾಡಿದ್ದಾರೆ.ಇನ್ನೂ ಈ ಪ್ರಕರಣದಿಂದ ದರ್ಶನ್ ಅವರನ್ನು ಹೊರತರಲು ವಿಜಯಲಕ್ಷ್ಮೀ ಅವರು ಕಾನೂನು ಹೋರಾಟದ ಜತೆಗೆ ದೇವರ ಮೊರೆ ಹೋಗುತ್ತಿದ್ದಾರೆ.

ದರ್ಶನ್ ಅವರನ್ನು ಮಾತನಾಡಿಸಲು ವಿಜಯಲಕ್ಷ್ಮೀ ಅವರು ಮಗ ವಿನೀಶ್ ಜತೆ ಆಗಾಗ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೂ ಭೇಟಿ ವೇಳೆ ದೇವಸ್ಥಾನದ ಪ್ರಸಾದ, ಸೇವಿಸಲು ಹಣ್ಣುಗಳನ್ನು ತರುತ್ತಿದ್ದಾರೆ.

ಇನ್ನೂ ಪ್ರತಿ ಸಲದಂತೆ ಈ ಬಾರಿಯೂ ಸೋಮವಾರದಂದೆ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇಂದು ಹುಣ್ಣಿಮೆ ಆಗಿರುವುದರಿಂದ ವಿಜಯಲಕ್ಷ್ಮಿಯವರು ದೇವಾಲಯಕ್ಕೆ ಹೋಗಿದ್ದು, ಆ ಪ್ರಯುಕ್ತ ಜೈಲಿಗೆ ತೆರಳಿದ್ದಾರೆ. ಅಷ್ಟೇ ಅಲ್ಲದೆ ಇಂದು ರಕ್ಷಾ ಬಂಧನ ಹಿನ್ನೆಲೆ ಸಹೋದರಿ ಕೂಡ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ