ಪತಿ ದರ್ಶನ್‌ಗಾಗಿ ದೇವಿಯ ಮೊರೆ ಹೋದ ವಿಜಯಲಕ್ಷ್ಮೀ

Sampriya

ಭಾನುವಾರ, 7 ಜುಲೈ 2024 (17:56 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮೀ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ತಮ್ಮ ಪತಿಯನ್ನು ಈ ಕೇಸ್‌ನಿಂದ ಪಾರು ಮಾಡಲು ಪವರ್ ಫುಲ್ ದೇವತೆಯ ಮೊರೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇನ್ನೂ ರೇಣುಕಾಸ್ವಾಮಿ ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸ್ ತಂಡ ಈಗಾಗಲೇ 200 ಸಾಕ್ಷ್ಯಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ನೀಡಿದೆ.

ಇನ್ನೂ ದರ್ಶನ್ ಅವರನ್ನು ಜೈಲಿನಿಂದ ಹೊರತರಲು  ಪತ್ನಿ ಕಾನೂನಿನ ಮೂಲಕ ಹೊರಟ ನಡೆಸುತ್ತಿದ್ದಾರೆ. ಅದರ ಜತೆ ದೇವಿಯ ಅನುಗ್ರಹವನ್ನು ಪಡೆದಿದ್ದಾರೆ.  ಮಾಹಿತಿ ಪ್ರಕಾರ ವಿಜಯಲಕ್ಷ್ಮೀ ಅವರು ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ  ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯಿದೆ.

ದೇವಿಯನ್ನು ತುಂಬಾನೇ ನಂಬುವ ದರ್ಶನ್ ಅವರು ಆಗಾಗ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯುತ್ತಿರುತ್ತಾರೆ. ಇನ್ನೂ ದರ್ಶನ್ ಅವರು ಜೈಲು ಸೇರಿದ ಬೆನ್ನಲ್ಲೇ ಅವರ ವಿರುದ್ಧ ಕೆಲವರು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ನೊಂದಿದ್ದ ವಿಜಯಲಕ್ಷ್ಮೀ ಅವರು ಅವರೆಲ್ಲರನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ ಎಂದು ಬೇಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ