ನಿರ್ಮಾಪಕರ ಮೇಲೆ ಬೇಸರ ಹೊರಹಾಕಿದ ಶ್ಯಾಡೋ ನಾಯಕ ವಿನೋದ್ ಪ್ರಭಾಕರ್

ಬುಧವಾರ, 10 ಫೆಬ್ರವರಿ 2021 (10:17 IST)
ಬೆಂಗಳೂರು: ನಟ ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೋ’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆ ಬಂದಿದ್ದರೂ ಸಾಕಷ್ಟು ಗಳಿಕೆ ಮಾಡದೇ ಇರುವುದಕ್ಕೆ ವಿನೋದ್ ನಿರ್ಮಾಪಕರ ಮೇಲೆ ಬೇಸರಗೊಂಡಿದ್ದಾರೆ.


ಕಾರಣ, ಶ್ಯಾಡೋ ರಾಂಗ್ ಟೈಂನಲ್ಲಿ ಬಿಡುಗಡೆ ಮಾಡಲಾಗಿದೆ ಎಂಬುದು ಅವರ ಅಭಿಪ್ರಾಯ. ಈಗಷ್ಟೇ ಜನ ಥಿಯೇಟರ್ ಗೆ ಬರುತ್ತಿದ್ದಾರೆ. ಇನ್ನು ಕೆಲವು ದಿನ ಕಳೆದು ಬಿಡುಗಡೆ ಮಾಡಿದ್ದರೆ, ಜನ ಸಿನಿಮಾ ನೋಡುತ್ತಿದ್ದರು. ಅವಸರದಲ್ಲಿ ಬಿಡುಗಡೆ ಮಾಡಿ, ಸರಿಯಾದ ಪ್ರಚಾರ ಕೊಡದೇ ಗಳಿಕೆಯಲ್ಲಿ ಸೊರಗಿತು ಎಂದು ವಿನೋದ್ ನಿರ್ಮಾಪಕರ ಮೇಲೆ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ