Kamal Hassan: ಕಮಲ್ ಹಾಸನ್ ಗೆ ಕಾಡಿ ಬೇಡಿ ಕ್ಷಮೆ ಕೇಳಿಸುವ ಜರೂರತ್ತು ಕನ್ನಡಿಗರಿಗೆ ಏನಿದೆ

Krishnaveni K

ಸೋಮವಾರ, 2 ಜೂನ್ 2025 (16:47 IST)
Photo Credit: X
ಬೆಂಗಳೂರು: ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಅವಮಾನ ಮಾಡಿದ್ದ ನಟ ಕಮಲ್ ಹಾಸನ್ ಗೆ ಕ್ಷಮೆ ಕೇಳಲು ಫಿಲಂ ಚೇಂಬರ್ ಮತ್ತೊಮ್ಮೆ ಗಡುವು ನೀಡಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಗೆ ಕಾಡಿ ಬೇಡಿ ಕ್ಷಮೆ ಕೇಳಿಸುವ ಜರೂರತ್ತು ಕನ್ನಡಿಗರಿಗೆ ಏನಿದೆ ಎಂದು ಕೇಳಿದ್ದಾರೆ.

ಥಗ್ಸ್ ಲೈಫ್ ಮೂವಿ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದ ಸೃಷ್ಟಿಸಿದ್ದರು. ಇದಾದ ಬಳಿಕ ಈಗ ಕನ್ನಡ ಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಮಲ್ ಗೆ ಕ್ಷಮೆ ಕೇಳಲು ಆಗ್ರಹಿಸಿದ್ದವು. ಆದರೆ ಇದುವರೆಗೆ ಅವರು ಕ್ಷಮೆ ಕೇಳಿಲ್ಲ.

ಇದೀಗ ಮತ್ತೊಮ್ಮೆ ವಾಣಿಜ್ಯ ಮಂಡಳಿ ಕಮಲ್ ಕ್ಷಮೆ ಯಾಚನೆಗೆ 24 ಗಂಟೆಗಳ ಗಡುವು ವಿಧಿಸಿದೆ. ಇದಕ್ಕೆ ಸಾರ್ವನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕಮಲ್ ಗೆ ಇಷ್ಟೆಲ್ಲಾ ಅತ್ತೂ ಕರೆದು ಕ್ಷಮೆ ಕೇಳಿಸುವ ಅಗತ್ಯವೇನಿದೆ? ನೇರವಾಗಿ ಅವರ ಸಿನಿಮಾ ಬ್ಯಾನ್ ಮಾಡಿ. ಆಗ ಅವರೇ ದಾರಿಗೆ ಬರುತ್ತಾರೆ.

ಅಷ್ಟಕ್ಕೂ ಕಮಲ್ ಏನು ಯಾರೂ ಕಾಣದ ನಟನಾ? ಯಾಕೋ ಇದನ್ನು ನೋಡುತ್ತಿದ್ದರೆ ಕ್ಷಮೆ ಕೇಳುವುದು ಕಮಲ್ ಗಿಂತ ನಮಗೇ ಹೆಚ್ಚಿದೆ ಎನ್ನುವ ರೀತಿಯಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ