ಕಿಚ್ಚ ಸುದೀಪ್ ಅಭಿಮಾನಿ ಸಂಘ ಸೈಬರ್ ಕ್ರೈಂಗೆ ದೂರು ನೀಡಲು ಕಾರಣವಾದರೂ ಏನು …?

ಸೋಮವಾರ, 2 ಏಪ್ರಿಲ್ 2018 (06:18 IST)
ಬೆಂಗಳೂರು : ಇತ್ತೀಚೆಗಷ್ಟೇ  ರಾಜ್ ಕುಮಾರ್ ಹಾಗೂ ಅವರ ಕುಟುಂಬದ ವಿರುದ್ದ ಅವಹೇಳನಕಾರಿಯಾಗಿ ಟ್ರೋಲ್ ಮಾಡಿದ್ದಕ್ಕೆ ಅವರ ಅಭಿಮಾನಿಗಳು ದೂರು ನೀಡಿದ್ದರು. ಅದೇರೀತಿ ಇದೀಗ ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬದ ವಿರುದ್ಧ ಕೆಲವರು ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಅವರ ಅಭಿಮಾನಿ ಸಂಘ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.


ಏಲಿಯನ್ ದಿ ಹೆಬ್ಬುಲಿ, ದೇವಣ್ಣ ಅಂಗಡಿ, ಬಿಗ್ ಬಾಸ್ ಸುದೀಪ್ ಎನ್ನುವ ಟ್ರೋಲ್ ಪೇಜ್ ಗಳಲ್ಲಿ ಸುದೀಪ್‍ರನ್ನು ತೀರಾ ಕೆಳ ಮಟ್ಟದ ಭಾಷೆ ಬಳಸಿ ಗೇಲಿ ಮಾಡಿದ್ದಲ್ಲದೆ ಜೊತೆಗೆ ಅವರ ಕುಟುಂಬದವರನ್ನು ಕೂಡ ಅವಹೇಳನ ಮಾಡಲಾಗಿತ್ತು. ಇದ್ದರಿಂದ ಕೋಪಗೊಂಡ ಸುದೀಪ್ ಅವರ ಅಭಿಮಾನಿ ಸಂಘ ಟ್ರೋಲ್ ಮಾಡಿದವರ ವಿರುದ್ದ ಸೈಬರ್ ಕ್ರೈಂಗೆ ದೂರು ನೀಡಿ ಟ್ರೋಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘದ ರಾಜ್ಯಾಧ್ಯಕ್ಷರಾದ ನವೀನ್ ಗೌಡ ಅವರು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ