ನಂಜನಗೂಡಿನಲ್ಲಿ ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದ ಯಶ್ ದಂಪತಿ

ಬುಧವಾರ, 11 ಮಾರ್ಚ್ 2020 (16:37 IST)
ಮೈಸೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಇಂದು ಮಗಳು ಐರಾ ಸಮೇತ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.


ನಂಜನಗೂಡಿನಲ್ಲಿ ಐರಾ ಕೇಶ ಮುಂಡನ ಮಾಡಿಸಿ ಯಶ್ ದಂಪತಿ ಹರಕೆ ತೀರಿಸಿದ್ದಾರೆ. ಕೂದಲು ಕಟ್ ಮಾಡಿಸಿಕೊಂಡಿರುವ ಮುದ್ದು ಗೊಂಬೆ ಐರಾ ಈಗ ಸಂಪೂರ್ಣ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

ಮಗಳ ಹೊಸ ಲುಕ್ ಜತೆಗೆ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಯಶ್ ಇದು ಸಮ್ಮರ್ ಕಟ್ ಅಲ್ಲ ಬಿಡಿ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ