ದನ ಕಾಯೋನ್ ಚಿತ್ರ ನಿರ್ಮಾಪಕರ ವಿರುದ್ಧ ಯೋಗರಾಜ್ ಭಟ್ ದೂರು

ಭಾನುವಾರ, 10 ಸೆಪ್ಟಂಬರ್ 2017 (08:18 IST)
ಬೆಂಗಳೂರು: ದುನಿಯಾ ವಿಜಿ ಮತ್ತು ಪ್ರಿಯಾಮಣಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ದನ ಕಾಯೋನು ಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಯೋಗರಾಜ್ ಭಟ್ ದೂರು ನೀಡಿದ್ದಾರೆ.

 
ಚಿತ್ರದ ನಿರ್ದೇಶನ ಕೆಲಸ ಮಾಡಿದ್ದಕ್ಕೆ ಇದುವರೆಗೆ ಸಂಭಾವನೆ ನೀಡಿಲ್ಲ ಎಂದು ಭಟ್ಟರು ಆರೋಪಿಸಿದ್ದಾರೆ. ನಿರ್ಮಾಪಕರು ನೀಡಿದ ಎರಡು ಚೆಕ್ ಗಳು ಬೌನ್ಸ್ ಆದ ಹಿನ್ನಲೆಯಲ್ಲಿ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಚಿತ್ರ ಬಿಡುಗಡೆ ಸಂದರ್ಭದಲ್ಲೂ ಇವರಿಬ್ಬರ ನಡುವೆ ಸಣ್ಣ ಮಟ್ಟಿನ ಅಸಮಾಧಾನ ಹೊಗೆಯಾಡಿತ್ತು. ಚಿತ್ರ ಪ್ರಚಾರಕ್ಕೆ ಬರಲ್ಲ ಎಂದು ಯೋಗರಾಜ್ ಭಟ್ಟರು ಬೆದರಿಕೆ ಹಾಕಿದ್ದರು. ಕೊನೆಗೆ ಅದು ಹೇಗೋ ಸಂಧಾನ ನಡೆಸಿದ ಬಳಿಕ ಚಿತ್ರ  ಬಿಡುಗಡೆಯಾಗಿತ್ತು.

ಇದನ್ನೂ ಓದಿ.. ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ