ಬಿಜೆಪಿ ಪ್ರಣಾಳಿಕೆಯಲ್ಲಿ ಅಭಿವೃದ್ಧಿಗೆ ಆದ್ಯತೆ

ಸೋಮವಾರ, 1 ಮೇ 2023 (18:55 IST)
ಡಬಲ್ ಇಂಜಿನ್ ಸರ್ಕಾರ ದಶಕಗಳಿಂದ ಬಾಕಿ ಉಳಿದಿರುವ ಮೂಲ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದೆ.. ವಸತಿಹೀನರಿಗೆ 10 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.. ಒನಕೆ ಓಬವ್ವ ಸಾಮಾಜಿಕ ನಿಧಿ ಸ್ಥಾಪನೆ ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ.. ಬೆಂಗಳೂರು ಹೊರಗೆ 10 ಲಕ್ಷ ಉದ್ಯೋಗ ಘೋಷಣೆ ಮಾಡಲಾಗಿದೆ.. ಬೆಂಗಳೂರನ್ನು EV ಸಿಟಿಯನ್ನಾಗಿ ಮಾಡುವ ಘೋಷಣೆ ಮಾಡಲಾಗಿದ್ದು, ಎಲೆಕ್ಟ್ರಿಕ್​​ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗಿದೆ.. ಇನ್ನು ಮೈಸೂರಿನಲ್ಲಿ ನಟ ಡಾ. ಪುನೀತ್ ರಾಜ್​ಕುಮಾರ್ ಫಿಲ್ಮ್ ಸಿಟಿ ನಿರ್ಮಾಣ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಮೆಟ್ರೋ ರೈಲು ನಿರ್ಮಾಣ ಭರವಸೆ ನೀಡಲಾಗಿದೆ.. ಕಬಡ್ಡಿಗಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ, ಮಿಷನ್ ಕನೆಕ್ಟ್ ಕರ್ನಾಟಕ ಅಡಿಯಲ್ಲಿ ಅತ್ಯಾಧುನಿಕ ಬೆಂಗಳೂರು-ಮಂಗಳೂರು ಎಕ್ಸ್​​ಪ್ರೆಸ್ ಹೈವೇ ನಿರ್ಮಾಣ, ದಾವಣಗೆರೆಯಲ್ಲಿ ಆಹಾರ ಸಂಸ್ಕರಣಾ ಪಾರ್ಕ್​​​ ಸ್ಥಾಪನೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ಬಿಜೆಪಿ ನೀಡಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ