ರಾಜ್ಯರಾಜಕೀಯಕ್ಕೆ ಡಿಕೆ ಸುರೇಶ್...!

ಬುಧವಾರ, 15 ಮಾರ್ಚ್ 2023 (19:26 IST)
ರಾಮನಗರದಿಂದ ಸ್ಪರ್ಧಿಸುವ ಮೂಲಕ ಸಂಸದ ಡಿಕೆ ಸುರೇಶ್ ರಾಜ್ಯರಾಜಕೀಯಕ್ಕೆ ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಇದೇ ವಿಚಾರಕ್ಕೆ ಇಂದು ಮಾತನಾಡಿದ ಡಿಕೆ ಸುರೇಶ್ ನನಗೆ ಮಾಧ್ಯಮಗಳ ವರದಿ ಮೂಲಕ ಗೊತ್ತಾಗಿದೆ.ಚುನಾವಣಾ ಪ್ರಯುಕ್ತ ಬೇರೆ ಬೇರೆ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೇನೆ. ಇದುವರೆಗೆ ಯಾರೂ ರಾಜ್ಯ ನಾಯಕರು ಈ ಬಗ್ಗೆ ಚರ್ಚೆ ಮಾಡಿಲ್ಲ.ನನ್ನ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಿಗೂ ನಾನೇ ಅಭ್ಯರ್ಥಿ ಅಂತ ಮತ ಕೇಳ್ತಾ ಇದ್ದೇನೆ. ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ನಾನೇ ಅಭ್ಯರ್ಥಿ ಅಂತ, ನನಗೆ ಶಕ್ತಿ ಕೊಡಿ ಅಂತ ಮತ ಯಾಚನೆ ಮಾಡ್ತಾ ಇದ್ದೇನೆ.ನನಗೆ ಜವಾಬ್ದಾರಿ ಇರುವುದರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಎಲ್ಲ ಕ್ಷೇತ್ರಗಳಲ್ಲೂ ನನಗೆ ಚುನಾವಣೆ ನಿಲ್ಲಿ ಎನ್ನುವ ಒತ್ತಡ ಇದೆ.ರಾಮನಗರ, ಚೆನ್ನಪಟ್ಟಣ, ಆರ್ ಆರ್ ನಗರ ಸೇರಿ ಎಲ್ಲ ಕಡೆಯ ಕಾರ್ಯಕರ್ತರು ಕೂಡ ಕೇಳ್ತಾ ಇದ್ದಾರೆ ಎಂದು ಹೇಳಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ