‘ಎಸ್ ಎಂ ಕೃಷ್ಣಗೆ ನ್ಯಾಯ ಕೊಡಿಸುವ ಮೊದಲು ಬಿಜೆಪಿಯವರು ಮೊದಲು ಅಡ್ವಾಣಿಗೆ ಆದ ಅನ್ಯಾಯ ಸರಪಡಿಸಲಿ!’

ಮಂಗಳವಾರ, 7 ಫೆಬ್ರವರಿ 2017 (11:24 IST)
ಬೆಂಗಳೂರು:  ಎಸ್ ಎಂ ಕೃಷ್ಣ ಬಿಜೆಪಿ ಸೇರುತ್ತಾರೆಂಬ ವರದಿಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಅವರಿನ್ನೂ ಬಿಜೆಪಿ ಸೇರುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.
 

ಅವರಿಗೆ ನೋವಾದೆರ ನಾವು ಅದನ್ನು ಸರಿಪಡಿಸುತ್ತೇವೆ. ಬಿಜೆಪಿಯವರು ಎಲ್ಲಿ ಸೀಟು ಖಾಲಿ ಇದೆ ಎಂದು ಕಾಯುತ್ತಿರುತ್ತಾರೆ. ಅವರು ಮೊದಲು ಅಡ್ವಾಣಿಯವರಿಗೆ ಆದ ಅನ್ಯಾಯ ಸರಿಪಡಿಸಲಿ ಎಂದು ಡಿಕೆಶಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಒಂದು ವೇಳೆ ಎಸ್ ಎಂ ಕೃಷ್ಣ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳುವುದಿದ್ದರೂ, ಬೆಂಬಲಿಗರೊಂದಿಗೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳುತ್ತಾರೆ. ಅದಕ್ಕೆ ಬಿಜೆಪಿಯವರ ಪೌರೋಹಿತ್ಯ ಬೇಕಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ