‘ಯಾವ ಕ್ಷಣದಲ್ಲಿ ಯಾರಿಗೆ ಬಾಂಬ್ ಇಡಬೇಕೆಂದು ಗೌಡರಿಗೆ ಚೆನ್ನಾಗಿ ಗೊತ್ತು’

ಶನಿವಾರ, 2 ಸೆಪ್ಟಂಬರ್ 2017 (09:49 IST)
ಬೆಂಗಳೂರು: ದೇವೇಗೌಡರಿಗೆ ಯಾವಾಗ ಏನು ಮಾಡಬೇಕು ಎಂದು ಯಾರೂ ಹೇಳಿಕೊಡಬೇಕಾಗಿಲ್ಲ. ಯಾವ ಕ್ಷಣದಲ್ಲಿ ಯಾರಿಗೆ ಬಾಂಬ್ ಹಾಕಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು ಎಂದು ಪುತ್ರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

 
ದೇವೇಗೌಡರಿಗೆ ರಾಜಕಾರಣ ಹೇಗೆ ಮಾಡಬೇಕೆಂದು ಯಾರೂ ಕಲಿಸಿಕೊಡಬೇಕಾಗಿಲ್ಲ. ಬಿಜೆಪಿ, ಕಾಂಗ್ರೆಸ್ ಏನೇ ಮಾಡಿದರೂ ಅದಕ್ಕೆ  ತಿರುಮಂತ್ರ ಹಾಕಕ್ಕೆ ಅವರಿಗೆ ಚೆನ್ನಾಗಿ ಗೊತ್ತು. ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ ಎಂದು ರೇವಣ್ಣ ಹೇಳಿಕೊಂಡಿದ್ದಾರೆ.

ಇನ್ನು ತಮ್ಮ ಪುತ್ರ ಪ್ರಜ್ವಲ್ ಗೆ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಬಿಟ್ಟ ವಿಚಾರ. ಪ್ರಜ್ವಲ್ ಪರ ನಾನು ಅರ್ಜಿ ಹಾಕಬೇಕಾಗಿಲ್ಲ. ಅವನೇ ಆ ಕೆಲಸ ಮಾಡುತ್ತಾನೆ ಎಂದು ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ.. ರಮಾನಾಥ ರೈಗೆ ಗೃಹ ಖಾತೆ ತಪ್ಪಿದ್ದೇಕೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ