‘ಅವರು ಬೆಂಕಿ ಹಚ್ಚಲಿ, ನಾವು ಆರಿಸುವ ಕೆಲಸ ಮಾಡುತ್ತೇವೆ’

ಶುಕ್ರವಾರ, 14 ಜುಲೈ 2017 (12:13 IST)
ಬೆಂಗಳೂರು: ಬಂಟ್ವಾಳ ಹಿಂಸಾಚಾರದ ಬಗ್ಗೆ ಬೆಂಕಿ ರಾಜಕಾರಣ ಶುರುವಾಗಿದೆ. ಬಿಜೆಪಿ ಮುಖಂಡರು ಹಿಂದೂ ನಾಯಕರನ್ನು ಬಂಧಿಸಿದರೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದರೆ, ಸಿಎಂ ಸಿದ್ದರಾಮಯ್ಯ ಆರಿಸುವ ಕೆಲಸವಷ್ಟೇ ನಮ್ಮದು ಎಂದಿದ್ದಾರೆ.


ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದೂ ಮುಖಂಡರನ್ನು ಬಂಧಿಸಿದರೆ ದ.ಕ. ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ಮುಖಂಡರಾದ ಬಿಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಬೆಂಕಿ ಹಚ್ಚುವುದು ಅವರ ಕೆಲಸ. ನಾವು ಆರಿಸು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಕೆಂಪಯ್ಯ ಅವರನ್ನು ದ.ಕ. ಜಿಲ್ಲೆಯ ಕೋಮು ಗಲಭೆ ನಿಯಂತ್ರಣಕ್ಕೆಂದೇ ನೇಮಿಸಲಾಗಿದೆ ಎಂಬ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದ ಸಿಎಂ ಅವರನ್ನು ನೇಮಕವೇ ಮಾಡಿಲ್ಲ ಎಂದಿದ್ದಾರೆ. ಅಂತೂ ದ.ಕ. ಜಿಲ್ಲೆಯ ಹಿಂಸಾಚಾರ ಪ್ರಕರಣಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ಕೆಸರೆರಚಾಟದ ವೇದಿಕೆಯಾಗಿದೆ.

ಇದನ್ನೂ ಓದಿ.. ಮುಗಿಯಿತು ಚೆನ್ನೈ ಸೂಪರ್ ಕಿಂಗ್ಸ್ ಅಜ್ಞಾತವಾಸ! ಯಾರೆಲ್ಲಾ ಇರ್ತಾರೆ ತಂಡದಲ್ಲಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ