ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದ ಗೆಳೆಯರಿಬ್ಬರು ತಮ್ಮ ಇತರ 12 ಜನ ಗೆಳೆಯರ ಜತೆ ಸುವರ್ಣಮುಖಿ ವೀಕ್ಷಿಸಲು ಬಂದಿದ್ದರು. ಕೊಳದ ಬಳಿ ಬಂದಾಗ ಪ್ರಶಾಂತ್ ಹಾಗೂ ಜೀವನ್ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಜೀವನ್ ಪ್ರಯತ್ನಿಸಿದಾಗ ಜೀವಭಯದಲ್ಲಿದ್ದ ಪ್ರಶಾಂತ್ ಆತನ ಕೈ ಹಿಡಿದೆಳೆದಿದ್ದಾನೆ.