ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದ ಪತಿ

ಶನಿವಾರ, 29 ಡಿಸೆಂಬರ್ 2018 (10:32 IST)
ಬೆಂಗಳೂರು : ಪತಿಯೊಬ್ಬ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡಿ ಕೊಲೆ ಮಾಡಿದ ಘಟನೆ ಕೆ.ಆರ್.ನಗರ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕಾವ್ಯಾರಾಣಿ ಸಾವನಪ್ಪಿದ ಮಹಿಳೆಯಾಗಿದ್ದು, ಈಕೆ 2 ವರ್ಷದ ಹಿಂದೆ ಸಂತೋಷ್ ಎಂಬಾತನನ್ನು  ಮದುವೆಯಾಗಿದ್ದಳು. ಸಂತೋಷ ಕಾಂಗ್ರೆಸ್ ನಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ, ಹಾಗೆ ಮುಂಬರುವ ಜಿ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ. ಅದಕ್ಕಾಗಿ 15 ಲಕ್ಷ ತರುವಂತೆ ಕಾವ್ಯಾರಾಣಿಗೆ ಒತ್ತಡ ಹೇರಿದ್ದ.


ಕಾವ್ಯಾರಾಣಿ ಹಣ ತರದಿದ್ದಾಗ ಹಿಂಸೆ ಕೊಟ್ಟು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ