ಬೆಂಗಳೂರಲ್ಲೊಂದು ಮನ ಕಲಕುವ ಸ್ಟೋರಿ..!

ಗುರುವಾರ, 18 ಆಗಸ್ಟ್ 2022 (19:08 IST)
ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಸೂಸೈಡ್ ಮಾಡಿಕೊಂಡಿದ್ದಾರೆ.ಮಹೇಶ್, ಜ್ಯೋತಿ ಮತ್ತು ಒಂದು  ಮಗು ಸಾವಿಗೆ ಶರಣಾಗಿದ್ದಾರೆ.ವಿಷ ಸೇವಿಸಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.ಒಂದು ವಾರದಿಂದ ಹೊಟ್ಟೆನೋವಿಂದ  ಮಹೇಶ್ ಬಾಳಲುದ್ರು.ಪ್ರತಿದಿನ ಟ್ಯಾಬ್ಲೇಟ್ ತಗೊಂಡು ಸುಸ್ತಾಗಿ ಹೋಗಿದ್ದರು.ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮಹೇಶ್  ಚೆಕ್ ಮಾಡಿಸಿದ್ದಾರೆ.ಈ ವೇಳೆ ಕ್ಯಾನ್ಸರ್ ಇದೆ ಎಂದು  ಡಾಕ್ಟರ್ ಹೇಳಿದ್ದಾರೆ.ಈ ಹಿಂದೆ ಕೂಡ ಹರಿಣಿ ಆಪರೇಷನ್ ಮಹೇಶ್ ಮಾಡಿಸಿಕೊಂಡಿದ್ದರು.ಇಂದು ಇಡೀ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳವಳ್ಳಿ ಮೂಲದ ಮಹೇಶ್  ಬಿಬಿಎಂಪಿಯಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ರು. ಇನ್ನೂ  ಕೋಣನಕುಂಟೆಯ ಎಸ್ ಬಿ ಎಂ ಕಾಲೋನಿಯಲ್ಲಿ ವಾಸವಿದ್ದು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ