ಸೈಬರ್ ಕ್ರಿಮಿನಲ್ಗಳನ್ನು ಮಟ್ಟ ಹಾಕಲು ಹೊಸ ಹೆಜ್ಜೆ

ಮಂಗಳವಾರ, 21 ನವೆಂಬರ್ 2023 (19:00 IST)
ಬೆಂಗಳೂರಿನಲ್ಲಿ ಸೈಬರ್ ಕ್ರಿಮಿನಲ್ಗಳನ್ನು ಮಟ್ಟ ಹಾಕಲು ಕಮಿಷನರ್ ಬಿ.‌ದಯಾನಂದ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಸೈಬರ್ ಕ್ರಿಮಿನಲ್ಗಳ ಪತ್ತೆಯ ಹೊಣೆಯನ್ನು ನಾಲ್ಕು ಡಿಸಿಪಿಗಳ ಹೆಗಲಿಗೆ ವಹಿಸಿ ಆದೇಶ ನೀಡಿದ್ದಾರೆ. ಪ್ರತಿಯೊಂದು ವಂಚನೆಯ ತನಿಖೆಯನ್ನು ಡಿಸಿಪಿಗಳ ಹೆಗಲಿಗೆ ನೀಡಿದ್ದಾರೆ. ಸೈಬರ್ ಕ್ರೈಮ್ ಪತ್ತೆ, ತನಿಖೆ, ಆರೋಪಿಗಳ ತ್ವರಿತ ಬಂಧನಕ್ಕೆ ಸೂಚನೆ ನೀಡಿದ್ದು,ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಡಿಸಿಪಿಯನ್ನು ಇನ್ಚಾರ್ಜ್ ಆಗಿ ನೇಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ