ಶ್ರೀಗಂಧ ಮರ ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ಶುಕ್ರವಾರ, 15 ಸೆಪ್ಟಂಬರ್ 2023 (16:00 IST)
ಅಕ್ರಮವಾಗಿ ಕಾರಿನಲ್ಲಿ ಶ್ರೀಗಂಧ‌‌ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಚಿನ್​ ಎಂಬಾತನನ್ನು ಯಾದಗಿರಿ ಪ್ರಾದೇಶಿಕ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.. ಬಗ್ಗಲಮಡು ಹಂದರಕಿ ರಸ್ತೆಯಲ್ಲಿ ಶ್ರೀಗಂಧ ಸಾಗಾಟ ಮಾಡ್ತಿದ್ದ ವೇಳೆ ಖದೀಮ ಸಿಕ್ಕಿ ಬಿದ್ದಿದ್ದಾನೆ.. ಯಾದಗಿರಿಯ ಹತ್ತಿಕುಣಿಯಿಂದ ಮಹಾರಾಷ್ಟ್ರಕ್ಕೆ ದುಷ್ಕರ್ಮಿ ಶ್ರೀಗಂಧದ ಕಟ್ಟಿಗೆಯನ್ನು ಸಾಗಿಸ್ತಿದ್ದ.. ಸುಮಾರು 85 ಕೆಜಿಯಷ್ಟು ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.. ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್, ಅರಣ್ಯಾಧಿಕಾರಿ ಜಯವರ್ಧನ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.. ಎರಡು ಕ್ವಿಂಟಾಲ್ ಶ್ರೀಗಂಧದ ಕಟ್ಟಿಗೆ, ಕಾರು ಮತ್ತು ಬೈಕ್​ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ