ಮಾಜಿ ಮಂತ್ರಿ ಮುನಿರತ್ನ ವಿರುದ್ಧ ಸ್ಪೋಟಕ ಆರೋಪ ಮಾಡಿದ ಮಹಿಳೆ

ಸೋಮವಾರ, 9 ಅಕ್ಟೋಬರ್ 2023 (14:20 IST)
ಕರ್ನಾಟಕ ರಾಜಕೀಯದಲ್ಲಿ ಹೊಸ CD ಲೇಡಿ ಹೊಸದೊಂದು ಬಾಂಬ್ ಸಿಡಿಸಿದ್ದಾಳೆ.ಆರ್. ಆರ್. ನಗರ ಶಾಸಕರಾಗಿರುವ
ಮಾಜಿ ಮಂತ್ರಿ ಮುನಿರತ್ನ ವಿರುದ್ಧ ಮಹಿಳೆ  ಸ್ಪೋಟಕ ಆರೋಪ ಮಾಡಿದ್ದಾಳೆ.ನನ್ನ ಜೀವನದ ಅದೋಗತಿಗೆ ಕಾರಣವೇ ಮಿಸ್ಟರ್ ಮುನಿರತ್ನ.ಎಲ್ಲಾ ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದೆ ಮುನಿರತ್ನ, ಅದಕ್ಕೋಸ್ಕರವೇ ನನ್ನ ಹೋರಾಟ.ಇದು ಅಂತ್ಯವಾಗಲೇಬೇಕು.ಬೇರೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎಂದು ಸಿಡಿ ಲೇಡಿ ಬೆಳ್ಳಂ ಬೆಳಗ್ಗೆ ವಿಡಿಯೋ ಮಾಡಿ ಗುಡುಗಿದ್ದಾರೆ.
 
ಆರ್.ಆರ್ ನಗರ ಅಷ್ಟೇ ಅಲ್ಲ.ಇಡೀ ರಾಜ್ಯದಲ್ಲಿ ಭೂಕಂಪವನ್ನ ಸಿಡಿ ಸೃಷ್ಟಿಸುವಂತಿದೆ.ರಾಜರಾಜೇಶ್ವರಿ ನಗರ ಫೇಸ್​ಬುಕ್​​ ಪೇಜ್​​ನಲ್ಲಿ ಸಿಡಿ ಲೇಡಿ ಪ್ರತ್ಯಕ್ಷವಾಗಿದ್ದು,ಹೊಸ ಸಿಡಿ ಲೇಡಿ ಒಕ್ಕಲಿಗರ ಫೇಸ್​ಬುಕ್​​​ ಪೇಜ್​​ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.ನನ್ನ ಜೀವನದ ದುರಂತಕ್ಕೆ ಮುನಿರತ್ನ ಅವರೇ ಹೊಣೆ.ಯಾವ ಕಾರಣಕ್ಕೂ ಈ ಹೋರಾಟ ಕೈ ಬಿಡಲ್ಲ.ಮುನಿರತ್ನರವರ ಹನಿ ಟ್ರ್ಯಾಪ್​​ ದಂಧೆ ಬಯಲಿಗೆ ಎಳಿತೀನಿ ಅಂದಿದ್ದಾರೆ.ನನ್ನನ್ನು ಬಳಸಿಕೊಂಡು ಹನಿ ಟ್ರ್ಯಾಪ್​​ ಮಾಡಿಸ್ತಿದ್ರು.ಮಹಿಳೆ ಗುರುತು ಮರೆಮಾಚಿಕೊಂಡು ಸಿಡಿ ಬಾಂಬ್​​ ಎಸೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ