ದೇಶದ್ರೋಹಿ ಪೋಸ್ಟ್ ಮಾಡಿದ ಯುವತಿ ಮನೆಗೆ ಬೆಂಕಿ: 6 ಜನರ ಬಂಧನ

ಭಾನುವಾರ, 17 ಫೆಬ್ರವರಿ 2019 (11:35 IST)
ದೇಶದ್ರೋಹಿ ಪೋಸ್ಟ್ ಮಾಡಿದ ಯುವತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಗೆ ಬೆಂಕಿ ಹಚ್ಚಿದ 6ಜನರ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧನ ಖಂಡಿಸಿ ಇಂದು ಮುರಗೋಡ, ಕಡಬಿ ಶಿವಾಪೂರ  ಬಂದ್ ಗೆ ಕರೆ ನೀಡಲಾಗಿದೆ. ಯುವತಿ ಪೋಸ್ಟ್ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಬಂದ್ ಗೆ ಕರೆ ನೀಡಲಾಗಿದೆ.

ಯುವತಿ ಮೇಲೆ‌ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಕೂಡಲೇ ಬಂಧಿತರನ್ನ ಬಿಡುಗಡೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. ಸ್ಥಳೀಯ ಹಾಗೂ ಸಾರ್ವಜನಿಕರಿಂದ ಕಡಬಿ ಶಿವಾಪೂರ ಬಂದ್ ಗೆ ಕರೆ ಕೊಡಲಾಗಿದೆ. ದೇಶದ್ರೋಹಿ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದ ಯುವತಿ, ಖಾಸಗಿ ಶಾಲೆಯ ಶಿಕ್ಷಕಿ ಕೂಡ ಆಗಿದ್ದಾಳೆ. ಯುವತಿ ಕ್ರಮ ಖಂಡಿಸಿ ಕಳೆದ ರಾತ್ರಿ ಯುವತಿ ಮನೆಗೆ ಬೆಂಕಿ ಹಚ್ಚಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ