ಕನ್ನಡ ಧ್ವಜಹಾರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ

ಶುಕ್ರವಾರ, 31 ಮಾರ್ಚ್ 2023 (18:40 IST)
ರಾಮನವಮಿ ಮೆರವಣಿಗೆಯಲ್ಲಿ ಕನ್ನಡ ಧ್ವಜಹಾರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮರಾಠಿ ಪುಂಡರು ಈ ಕೃತ್ಯ ನಡೆಸಿ, ಮತ್ತೆ ಪುಂಡಾಟ ಶುರು ಮಾಡಿದರಾ ಎಂಬ ಅನುಮಾನ ಮೂಡಿದೆ. ನಿನ್ನೆ ಬೆಳಗಾವಿಯಲ್ಲಿ ಅದ್ದೂರಿ ರಾಮನವಮಿ ಮೆರವಣಿಗೆ ನಡೆದಿತ್ತು.. ಬೆಳಗಾವಿಯ ಟಿಳಕ ಚೌಕ ಬಳಿ ಶಿವಸೇನಾ ಕಚೇರಿಯ ಮುಂದೆ ಮೆರವಣಿಗೆ ನಡೆಸಲಾಗ್ತಿತ್ತು.. ಈ ವೇಳೆ ಮಂಜುನಾಥ ಎಂಬ ಯುವಕನ ಮೇಲೆ ಕೆಲ ಯುವಕರ ಗುಂಪು ಏಕಾಏಕಿ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕನ್ನಡಪರ ಹೋರಾಟಗಾರರು ದೂರು ನೀಡಿದ್ದಾರೆ. ಖಡೆಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ