ಮಳೆಗೆ ಸಿಲುಕಿ ಯುವತಿ ಸಾವು

ಭಾನುವಾರ, 21 ಮೇ 2023 (18:16 IST)
ಅಂಡರ್ ಪಾಸ್ ನಲ್ಲಿ ಕಾರು‌ ಸಿಲುಕಿತ್ತು. ಓರ್ವ ಯುವತಿ ಸಾವನ್ನಪ್ಪಿದ್ದಾಳೆ.ಹೈದರಾಬಾದ್‌ಮೂಲದ ಕುಟುಂಬ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದರು.ಇಸ್ಕಾನ್ ದೇವಾಲಯಕ್ಕೆ ಹೋಗಿ ವಾಪಾಸ್ ಬರುವಾಗ ದುರ್ಘಟನೆ ನಡೆದಿದೆ.
 
ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿದ್ದಾಳೆ.ಚಿಕಿತ್ಸೆ ನೀಡದೆ ಆಸ್ಪತ್ರೆ ವೈದ್ಯರು ನಕಾರ  ಮಾಡಿದ್ದಾರೆ.ಈಗಾಗಲೇ ಸತ್ತು ಹೋಗಿದ್ದಾರೆಂದು ಆಸ್ಪತ್ರೆ ಯ ಮುಂದೆ ಅರ್ಧ ಗಂಟೆ ಗೂ ಹೆಚ್ಚು ಸಮಯ ಹೊರಗಡೆ ಕಾಯಿಸಿದ್ದಾರೆ.ನಂತರ ಯುವತಿ ವೈದ್ಯರ ನಿರ್ಲಕ್ಷ್ಯಕ್ಕೆ ಸಾವನಾಪ್ಪಿದ್ದಾಳೆ.ಒಂದು ಕಡೆ ಅವೈಜ್ಞಾನಿಕ ಆಂಡರ್ ಪಾಸ್ ನಿರ್ಮಾಣ ಮತ್ತೊಂದು ಕಡೆ ಅಂಡರ್ ಪಾಸ್ ಗಳು ಸಂಪೂರ್ಣ ಜಲಾವೃತವಾಗಿದೆ.
ಬೆಂಗಳೂರು ಬಹುತೇಕ ಕಡೆಗಳಲ್ಲಿ ವರುಣನ ರೌದ್ರ ನರ್ತನದಿಂದ ನಗರದ K. R ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಬಹುತೇಕ ಜಲಾವೃತವಾಗಿದೆ.ಕೆ ಆರ್ ಸರ್ಕಲ್ ಸುತ್ತ ಮುತ್ತಲಿನ ರಸ್ತೆಗೆಲ್ಲವು ಜಲವೃತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ