6 ವರ್ಷಗಳ ಬಳಿಕ ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

ಶನಿವಾರ, 12 ಮಾರ್ಚ್ 2022 (19:18 IST)
ಯಲಹಂಕದ ರೈತ ಸಂತೆಯಲ್ಲಿ 6 ವರ್ಷದ ಹಿಂದೆ ತರಕಾರಿ ಮಾರಾಟದ ವೇಳೆ ಕಳೆದುಕೊಂಡಿದ್ದ ಮಗನನ್ನು ಆಧಾರ್ ಕಾರ್ಡ್ ತಾಯಿ ಜೊತೆಗೆ ಮತ್ತೆ ಸೇರಿಸಿರುವ ಹೃದಯ ಸ್ಪರ್ಶಿ ಕಥೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
 
2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರ ಜೊತೆ ತರಕಾರಿ ಮಾರಾಟಕ್ಕೆ ಭರತ್ ಬಂದಿದ್ದರು. ಆಗ ಭರತ್ ಕೇವಲ 13 ವರ್ಷದವರಾಗಿದ್ದರು. ಈ ವೇಳೆ ನಿಗೂಢವಾಗಿ ಭರತ್ ಕಣ್ಮೆರೆಯಾಗಿದ್ದಾರೆ. ಮೂಗ ಮಗನನ್ನು ಕಾಣದೇ ಕಂಗಲಾಗಿ, ಯಲಹಂಕದ ರೈತ ಸಂತೆಯಲ್ಲಿ ಪಾರ್ವತಮ್ಮ ಅವರು ಹುಡುಕಾಟ ನಡೆಸಿ, ಕೊನೆಗೆ ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಕಾಣೆಯಾದ ಪುತ್ರನಿಗೆ ಹಂಬಲಿಸಿ ಕಂಡ, ಕಂಡ ದೇವರಿಗೆಲ್ಲ ಹರಕೆ ಹೊತ್ತಿದ್ದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ