ಲಂಚ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದೋರಾರು?

ಭಾನುವಾರ, 5 ಮೇ 2019 (18:50 IST)
ಲಂಚ ಪಡೆಯುವಾಗ ಎಸಿಬಿ ಬಲೆಗೆ ಸರಕಾರಿ ನೌಕರ ಬಿದ್ದಿದ್ದಾರೆ.

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಲಂಚ ಸ್ವೀಕಾರಿಸುತ್ತಿದ್ದಾಗ ಎಸಿಬಿ ಬಲೆಗೆ ವಿಲೇಜ್ ಅಕೌಂಟಂಟ್ ಮತ್ತು ಸಹಾಯಕ ಬಿದ್ದಿದ್ದಾರೆ.

ಖಾತೆ ಮಾಡಿಕೊಟ್ಟು ಆರ್.ಟಿ.ಸಿ ಹೆಸರು ಬದಲಾವಣೆ  ಮಾಡಿಕೊಡಲು 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ರು. ಕಡಿರುದ್ಯಾವರ ವಿ.ಎ. ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದವರು.  ಬೆಳಿಗ್ಗೆ ಮೂರು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬಲೆಗೆ‌ ಬಿದ್ದಿದ್ದಾರೆ.

ನಿನ್ನೆ ಸಹಾಯಕ ರಮೇಶ್ ನಾಯ್ಕ್ ಎರಡು ಸಾವಿರ ಹಣ ಪಡೆದಿದ್ದ. ಮಿತ್ತಬಾಗಿಲು ನಿವಾಸಿಯಿಂದ ಎಸಿಬಿಗೆ ದೂರು ನೀಡಲಾಗಿತ್ತು.

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಆರೋಪಿ ವಿ.ಎ. ಮಂಜುನಾಥ್, ಸಹಾಯಕ ರಮೇಶ್ ನಾಯ್ಕ್  ವಿಚಾರಣೆ ನಡೆಸಲಾಗುತ್ತಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ