ಡಿಕೆಶಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

ಶುಕ್ರವಾರ, 21 ಏಪ್ರಿಲ್ 2023 (15:07 IST)
ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ​ ಸಿಹಿ ಸುದ್ದಿ ಸಿಕ್ಕಿದೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​ಗೆ ಬಿಗ್ ರಿಲೀಫ್​ ಸಿಕ್ಕಿದಂತಾಗಿದೆ.. ಡಿ.ಕೆ.ಶಿವಕುಮಾರ್​​​​ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾ ಆಯೋಗ ಪರಿಶೀಲನೆ ನಡೆಸಿ ತನ್ನ ನಿಲುವು ಪ್ರಕಟಿಸಿದೆ.. ಮೊದಲು ಟ್ಯಾಕ್ಸ್ ವಿಚಾರದಲ್ಲಿ ಗೊಂದಲ ವ್ಯಕ್ತವಾಗಿತ್ತು, ಆದ್ರೆ ಎಲ್ಲವನ್ನೂ ಕ್ಲಿಯರ್ ಮಾಡಿ ಚುನಾವಣಾ ಆಯೋಗ ನಾಮಪತ್ರ ಊರ್ಜಿತಗೊಳಿಸಿದೆ.. ಡಿ.ಕೆ.ಶಿವಕುಮಾರ್​​​ ಪ್ರತಿಯೊಂದಕ್ಕೂ ಸೂಕ್ತ ದಾಖಲೆಗಳನ್ನ ಒದಗಿಸಿದ್ದಾರೆ.. ಡಿ.ಕೆ.ಶಿವಕುಮಾರ್​​ ಸಲ್ಲಿಸಿದ್ದ ಎರಡೂ ನಾಮಪತ್ರಗಳು ಅಂಗೀಕಾರವಾಗಿದ್ದು, ಕನಕಪುರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಿಕೆಶಿ ಕಣಕ್ಕೆ ಇಳಿಯಲಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ