ಯಡಿಯೂರಪ್ಪ ಅಸಲಿ ಮುಖ ಬಿಚ್ಚಿಟ್ಟ ನಟ ಜಗ್ಗೇಶ್

ಗುರುವಾರ, 21 ಡಿಸೆಂಬರ್ 2017 (08:41 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿಜ ಮುಖವನ್ನು ನಟ, ಬಿಜೆಪಿ ನಾಯಕ ಜಗ್ಗೇಶ್ ತೆರೆದಿಟ್ಟಿದ್ದಾರೆ.
 

ಇತ್ತೀಚೆಗೆ ಯಡಿಯೂರಪ್ಪಗೆ ಹೃದಯಾಘಾತವಾದ ಸುಳ್ಳು ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಗ್ಗೇಶ್ ರಾಜಕೀಯ ಧ್ವೇಷಕ್ಕಾಗಿ ಈ ರೀತಿ ಸಾಧಕರಿಗೆ ಅಪಮಾನಿಸುವುದು ತಪ್ಪು ಎಂದಿದ್ದಾರೆ.

‘ಬಿಎಸ್ ವೈರನ್ನು ವೈಯಕ್ತಿಕವಾಗಿ ನೋಡಿದರೆ ಅವರ ನಿಜ ಗುಣ ಅರ್ಥವಾಗುತ್ತದೆ. ಹೃದಯದಿಂದ ಜನರನ್ನು ಪ್ರೀತಿಸುವ ತಂದೆಯ ಗುಣದ ವ್ಯಕ್ತಿ. ಮೇಲ್ನೋಟಕ್ಕೆ ಕೋಪಿಷ್ಠನಂತೆ ಕಂಡರು ಅಂತರ್ಯದಲ್ಲಿ ಮಗುವಿನಂತಹ ಮನಸ್ಸು. ಒಬ್ಬರನ್ನು ಅರಿತು ಪ್ರೀತಿ ಧ್ವೇಷ ಪ್ರಕಟಿಸಬೇಕು’ ಎಂದು ಜಗ್ಗೇಶ್ ತಮ್ಮ ನಾಯಕನ ಗುಣಗಾನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ