ಚಿಕ್ಕೋಡಿಯ ಜೈನ ಮುನಿ‌ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಮೌನ ಪ್ರತಿಭಟನೆ

ಸೋಮವಾರ, 10 ಜುಲೈ 2023 (14:50 IST)
ಪರಮ‌ ಪೂಜ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ‌ ಖಂಡಿಸಿ ನಗರದಲ್ಲಿ ಮೌನ ಪ್ರತಿಭಟನೆ ಮಾಡಲಾಗಿದೆ.ಬೆಂಗಳೂರಿನ ಜಯನಗರದ ಜೈನ ಮಂದಿರದಿಂದ ಸೌತ್ ಎಂಡ್ ಸರ್ಕಲ್ ನ ಅಶೋಕ ಪಿಲ್ಲರ್ ವರೆಗೂ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ.ಸಾವಿರಾರು ಜೈನ ಸಮುದಾಯದವರಿಂದ ಮೌನ ಮೆರವಣಿಗೆ ನಡೆದಿದ್ದು,ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಲ್ನಡಿಗೆ ಜಾಥಾ ಮಾಡಿದ್ದಾರೆ.
 
ಇನ್ನೂ ಕಾಲ್ನಡಿಗೆ ಜಾಥಾಕ್ಕೂ ಮುನ್ನ ಜಯನಗರದ ಚಕ್ರೇಶ್ವರಿ ಜೈನ್ ಮಂದಿರದಲ್ಲಿ ಸಭೆ ನಡೆಸಲಾಗಿತ್ತು.ವಿರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರ ಕುಮಾರ್ ಹಾಗೂ ಅನಿತಾ ಸುರೇಂದ್ರ ಕುಮಾರ್ ಸೇರಿದಂತೆ ಜೈನ ಸಮುದಾಯದ ಹಲವು ಮುಖಂಡರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ