ಸ್ಟಾಲಿನ್​ ಜೊತೆ ಸಿಎಂ, ಡಿಸಿಎಂ ಹೊಂದಾಣಿಕೆ

ಶುಕ್ರವಾರ, 22 ಸೆಪ್ಟಂಬರ್ 2023 (16:05 IST)
ತಮಿಳುನಾಡು ಸಿಎಂ M.K.ಸ್ಟಾಲಿನ್​ ಜೊತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅಡ್ಜಸ್ಟ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಅವರು ಸ್ಟಾಲಿನ್​​ ವಿರುದ್ಧ ಒಂದೇ ಒಂದು ಹೇಳಿಕೆ ಕೊಡ್ತಾ ಇಲ್ಲ ಎಂದು ಬಿಜೆಪಿ ಶಾಸಕ R.ಅಶೋಕ್​ ಆರೋಪಿಸಿದ್ದಾರೆ.. ಬೆಂಗಳೂರಲ್ಲಿ ಮಾತನಾಡಿದ ಅವರು, ಸಚಿವರು ಇಲ್ಲೇ ಗೂಟ ಹೊಡೆದು ಕುಳಿತಿದ್ದಾರೆ. ಕಾಂಗ್ರೆಸ್​ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ತಾ ಇದೆ.. ಆದರೆ ಕಾಟಾಚಾರಕ್ಕೆ ಸಂಸದರ ಸಭೆ ಮಾಡಿದ್ದಾರೆ.. ವಿಪಕ್ಷಗಳು ಬೈತಾರೆ ಎಂದು ಸಭೆ ಮಾಡಿದ್ದಾರೆ ಎಂದು ಆರೋಪಿಸಿದ್ರು.. ತಮಿಳುನಾಡು ಸುಪ್ರೀಂ ಕೋರ್ಟ್​ಗೆ ಅಪೀಲ್ ಮಾಡಿದ ಮೇಲೆ ನಮ್ಮ ರಾಜ್ಯ ಸರ್ಕಾರ ಅಪೀಲ್​​ ಹೋಗಿದೆ.. ಮೊದಲೇ ಅಪೀಲು ಹೋಗಲು ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ