ಎಲ್ಲಾ ದೇವಸ್ಥಾನ, ಮಠಗಳಲ್ಲಿ ಪ್ರಸಾದ ವಿತರಣೆ ಬಗ್ಗೆ ಎಚ್ಚರ ವಹಿಸಿ - ಸಿಎಂ ಕುಮಾರಸ್ವಾಮಿ ಸೂಚನೆ

ಭಾನುವಾರ, 16 ಡಿಸೆಂಬರ್ 2018 (11:39 IST)
ಬೆಂಗಳೂರು : ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಹಿನ್ನಲೆಯಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ, ಮಠಗಳಲ್ಲಿ ಎಚ್ಚರ ವಹಿಸಿ ಪ್ರಸಾದ ವಿತರಣೆ ಮಾಡಲು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ದೇಗುಲ ಹಾಗೂ ಮಠಗಳಲ್ಲಿ ಪ್ರಸಾದ ವಿತರಿಸುವ ಪದ್ಧತಿ ಇದೆ. ತಿರುಪತಿ, ಧರ್ಮಸ್ಥಳ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ ಮಠಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಎಚ್ಚರಿಕೆ ವಹಿಸಿ ಪ್ರಸಾದ ವಿತರಿಣೆ ಮಾಡುವಂತೆ ಸಿಎಂ ತಿಳಿಸಿದ್ದಾರೆ.

 

ಹಾಗೇ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹ ಮಾಡಲಾಗುತ್ತಿದೆ. ಇದೇ ಮಾದರಿಯನ್ನು ಪ್ರತಿಯೊಂದು ಕಡೆಯೂ ಅನುಸರಿಸಬೇಕು ಎಂದು ಎಲ್ಲಾ ದೇವಸ್ಥಾನದ ಮಂಡಳಿಗಳಿಗೆ ಸಿಎಂ ಟ್ವೀಟರ್ ಮೂಲಕ ಸೂಚನೆ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ