ಹರಣದ ಆರೋಪ ಕಾಂಗ್ರೆಸ್ ಗೆ ತಿರುಗುಬಾಣವಾಗುತ್ತೆ- ಸಿಎಂ

ಭಾನುವಾರ, 20 ನವೆಂಬರ್ 2022 (14:16 IST)
27 ಲಕ್ಷ ಮತದಾರರ ಪಟ್ಟಿ ರದ್ದು ಮಾಡಿದಾರೆ ಅಂತ ಆರೋಪ ಮಾಡಿರುವುದು ನಿರಾಧಾರ ಆರೋಪ.ಕಾಂಗ್ರೆಸ್ ಕ್ಷೇತ್ರಗಳಿಗಿಂತ ಬಿಜೆಪಿ ಕ್ಷೇತ್ರಗಳಲ್ಲೇ ಹೆಚ್ಚು ಮತದಾರರ ಹೆಸರುಗಳು ರದ್ದಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
 
ತನಿಖೆಯಲ್ಲಿ ಸತ್ಯಸತ್ಯತೆ ಹೊರಬರಲಿದೆ.ಕಾಂಗ್ರೆಸ್ ನವರು ಕೇಂದ್ರ ಚುನಾವಣಾ ಆಯೋಕ್ಕಾದರೂ ದೂರು ಕೊಡಲಿ,ಎಲ್ಲಿ ಬೇಕಾದರೂ ದೂರು ಕೊಡಲಿ, ನ್ಯಾಯ ನ್ಯಾಯನೇ, ಸತ್ಯ ಸತ್ಯನೇ ಎಂದು ಕಾಂಗ್ರೆಸ್ ಆರೋಪಗಳನ್ನ ಸಿಎಂ ನಿರಾಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ