ಅಂಬರೀಷ್‌‌‌ ಅವರನ್ನು ಬಿಟ್ಟು ಮಂಡ್ಯ ರಾಜಕಾರಣ ಅಸಾಧ್ಯ: ಡಿಕೆಶಿ

ಗುರುವಾರ, 23 ಜೂನ್ 2016 (18:35 IST)
ಬೆಂಗಳೂರು: ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ನಮ್ಮ ಹಿರಿಯಣ್ಣ, ಅವರನ್ನು ಬಿಟ್ಟು ಮಂಡ್ಯದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ಸಚಿವ ಸಂಪುಟ ಪುನರ್‌ರಚನೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಛೇರಿ ಕೃಷ್ಣಾಗೆ ತೆರಳಿ ಭಿನ್ನಮತಿಯರ ಮನವೊಲಿಕೆ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ನಮ್ಮ ಹಿರಿಯಣ್ಣ, ಅರನ್ನು ಬಿಟ್ಟು ಮಂಡ್ಯದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೆ? ನಾನು ಪಕ್ಕದ ಜಿಲ್ಲೆಯವನು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಾರೆ. ಇದು ತಾತ್ಕಾಲಿಕವಷ್ಟೇ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ