ಅಂಬರೀಶ್ ವಿರುದ್ಧ ಕಾಗೋಡು ತಿಮ್ಮಪ್ಪ ಅಸಮಾಧಾನ

ಬುಧವಾರ, 22 ಜೂನ್ 2016 (13:09 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಂಬರೀಶ್ ವಾಗ್ದಾಳಿ ನಡೆಸಿರುವುದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಪ್ರತಿಯೊಬ್ಬರಿಗೂ ಸಚಿವ ಸ್ಥಾನ ನೀಡಲು ಸಾಧ್ಯನಾ? ಅಂಬರೀಶ್ ಹಿರಿಯ ನಟ, ಹಿರಿಯ ರಾಜಕಾರಣಿ. ಅವರು ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
 
ಬೇಕು ಎಂದಾಗ ಧರಿಸಲು ಬೇಡ ಎಂದಾಗ ಎಸೆಯಲು ನಾನೇನು ಚಪ್ಪಲಿಯಲ್ಲ ಎಂದು ಅಂಬರೀಶ್ ನೀಡಿರುವ ಹೇಳಿಕೆ ತೀರಾ ಕೀಳುಮಟ್ಟದ್ದು. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಭಿನ್ನಾಭಿಪ್ರಾಯಗಳಿದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು  ಸಲಹೆ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹಿಟ್ಲರಾ? ಅವರಿಗೆ ಸ್ವಲ್ಪವಾದರೂ ಡಿಗ್ನಿಟಿ ಇಲ್ವಾ. ಸಚಿವ ಸಂಪುಟದಿಂದ ಕೈಬಿಡುತ್ತಿರುವುದಾಗಿ ಸೌಜನ್ಯಕ್ಕೆ ಒಂದು ಮಾತು ಕೂಡಾ ಹೇಳದೆ ಅಪಮಾನ ಮಾಡಿದ್ದಾರೆ. ನಮಗೂ ಮಾನ ಮರ್ಯಾದೆ ಇದೆ ಎಂದು ಮಾಜಿ ಸಚಿವ ಅಂಬರೀಶ್ ಗುಡುಗಿದ್ದರು.    

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ