ಸಂಸತ್ ಚುನಾವಣೆಗೆ ಟಿಕೆಟ್ ಕೊಟ್ಟರೂ ಸ್ಪರ್ಧಿಸಲ್ಲ ಎಂದ ಅಂಬರೀಶ್

ಗುರುವಾರ, 5 ಜುಲೈ 2018 (17:28 IST)
ಮುಂಬರುವ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದರೂ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಷ್ ಹೇಳಿದ್ದಾರೆ.
ಈಚೆಗೆ ನಿಧನರಾದ ಮಂಡ್ಯ ನಗರ ಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಗೆ ತಾವು ಈಗಲೂ ಅನಿವಾರ್ಯ ಎಂದಿದ್ದಾರೆ.

ನಾನು ಚುನಾವಣಾ ಅಖಾಡದಲ್ಲಿದ್ದರೆ ಕಾಂಗ್ರೆಸ್ ಮಂಡ್ಯದಲ್ಲಿ ಹೀನಾಯವಾಗಿ ಸೋಲುತ್ತಿರಲಿಲ್ಲ. ಚುನಾವಣೆಗೂ ಮುನ್ನ ನಾನು ಜೆಡಿಎಸ್ ಜತೆ ಕೈ ಜೋಡಿಸಿರಲಿಲ್ಲ. ಅಂತಹ ಲುಚ್ಛಾ ಕೆಲಸ ಎಂದಿಗೂ ಮಾಡೋಲ್ಲ ಎಂದಿದ್ದಾರೆ. 

ನಾನೇನಿದ್ದರೂ ಸ್ಟ್ರೈಟ್ ಫಾರ್ವರ್ಡ್. ಲೋಕಸಭೆ ಚುನಾವಣೆ ಸಂದರ್ಭ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಒಳ್ಳೆಯದು ಅಂತ ಮಾಜಿ ಸಚಿವ ಅಂಬಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ