ಸಮಾವೇಶಕ್ಕೆ ಬಂದವರಿಗೆ ವಿಚಿತ್ರ ಸವಾಲು ಕೊಟ್ಟ ಅಮಿತ್ ಶಾ
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು ಕೇಂದ್ರ ರಾಜ್ಯಕ್ಕೆ ಕೊಟ್ಟಿರುವ 111 ಯೋಜನೆಯ ಹೆಸರು ಕೂಗಿ ಹೇಳುತ್ತೇನೆ. ಸಾಕೆಂದಾಗ ಚಪ್ಪಾಳೆ ತಟ್ಟಿ, ನಿಲ್ಲಿಸುತ್ತೇನೆ ಎಂದರು. ಅದರಂತೆ ಅವರು 12 ನೇ ಯೋಜನೆ ಹೆಸರು ಹೇಳುತ್ತಿದ್ದಂತೆ ಸಮಾವೇಶದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ರಾಹುಲ್ ಬಾಬಾ ಎಂದು ಲೇವಡಿ ಮಾಡಿದ ಅಮಿತ್ ಶಾ ಸಿಎಂ ಸಿದ್ದರಾಮಯ್ಯರನ್ನೂ ಲೇವಡಿ ಮಾಡದೇ ಬಿಡಲಿಲ್ಲ. ಸಿದ್ದರಾಮಯ್ಯ ಈಗ ಸ್ವಲ್ಪ ನಿದ್ರೆಯಿಂದ ಎಚ್ಚರಗೊಂಡಿದ್ದಾರೆ ಎಂದು ಅವರು ಕಾಲೆಳೆದಿದ್ದಾರೆ.