ಸಿಎಂ ಸಿದ್ದರಾಮಯ್ಯ ಬಗ್ಗೆ ಸಚಿವ ಅನಂತಕುಮಾರ್ ಗೆ ಶ್ರೀಲಂಕಾದಿಂದ ಬಂದ ಮೆಸೇಜ್ ನಲ್ಲಿ ಏನಿತ್ತು ಗೊತ್ತಾ?!

ಶನಿವಾರ, 17 ಮಾರ್ಚ್ 2018 (12:18 IST)
ಬೆಂಗಳೂರು: ಬೆಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಅನಂತ ಕುಮಾರ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಸಿಎಂ ಸಿದ್ದರಾಮಯ್ಯ ಕೌರವರ ವಂಶದವರು ಎಂದು ನನಗೆ ಯಾರೋ ಹೇಳಿದ್ದರು. ಆದರೆ ತಕ್ಷಣದಿಂದ ಶ್ರೀಲಂಕಾದಿಂದ ಮೆಸೇಜ್ ಬಂತು, ಸಿಎಂ ಕುಂಭಕರ್ಣನ ವಂಶದವರೆಂದು’ ಎಂದು ಅನಂತ ಕುಮಾರ್ ಲೇವಡಿ ಮಾಡಿದ್ದಾರೆ.

ಬಿಟಿಎಂ ಲೇಔಟ್ ನಲ್ಲಿ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆಯಲ್ಲಿ ಆರ್. ಅಶೋಕ್ ಭಾಗವಹಿಸದೇಇರುವುದು ಹಲವು ಅಸಮಾಧಾನದ ಹೊಗೆ ಎಬ್ಬಿಸಿದೆ. ಆದರೆ ಕಾಲು ನೋವಿನ ಹಿನ್ನಲೆಯಲ್ಲಿ ಅವರು ಭಾಗವಹಿಸಿಲ್ಲ. ಇದರಲ್ಲಿ ಬೇರೆ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ನಾಯಕರು ತೇಪೆ ಹಾಕುವ ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ