ಸರ್ಕಾರದಿಂದ ಅನ್ನಭಾಗ್ಯ ದೋಖಾ!

ಸೋಮವಾರ, 24 ಜುಲೈ 2023 (17:47 IST)
ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದಲ್ಲಿ ದೋಖಾ ಆಗಿದೆ ಎಂದು ಬಿಜೆಪಿ ಪರೋಕ್ಷವಾಗಿ ಟ್ವೀಟ್​​ ಮಾಡಿದೆ.ಹತ್ತು ಕೆಜಿ ಅಕ್ಕಿಯ ಗ್ಯಾರಂಟಿ ನೀಡಿ, ಮೋಸದಿಂದ ಅದನ್ನು ಐದು ಕೆಜಿಗೆ ಇಳಿಸಿ, ಅದನ್ನೂ ಕೊಡದೆ ಕೇವಲ ₹170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ ಎಂದ ಸಿದ್ದರಾಮಯ್ಯ ಸರ್ಕಾರ ಅದನ್ನೂ ನೀಡದೆ ಕೈ ಎತ್ತಿದೆ.ಹಣ ವರ್ಗಾಯಿಸಲೂ ಕಂಡೀಷನ್ಸ್ ಹಾಕುವ ಕಾಂಗ್ರೆಸ್​​​ ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ. ಬಹುಶಃ, 12 ಜಿಲ್ಲೆಯವರ ಕಮಿಷನ್ ಸಂದಾಯ ಬಾಕಿ ಇರುವ ಕಾರಣ ಬಡಜನರ ಖಾತೆಗೆ ಸರ್ಕಾರ ಹಣ ಹಾಕುತ್ತಿಲ್ಲವೇನೋ ಎಂದು ಬಿಜೆಪಿ ಟ್ವೀಟ್​​ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ