ಅನರ್ಹ ಶಾಸಕರ ವಿರುದ್ಧ ಮತ್ತೊಂದು ಕೇಸ್ – ಉಪ ಚುನಾವಣೆಯಲ್ಲಿ ಬೆಚ್ಚಿಬಿದ್ದ ಬಿಜೆಪಿ ಅಭ್ಯರ್ಥಿಗಳು

ಸೋಮವಾರ, 25 ನವೆಂಬರ್ 2019 (14:57 IST)

ರಾಜ್ಯದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರೋ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದಂತಿದೆ ಈ ಸುದ್ದಿ.
 

ಆಪರೇಷನ್ ಕಮಲ ಮೂಲಕ ಅನರ್ಹ ಶಾಸಕರು ಹಣ ಪಡೆದಿದ್ದಾರೆ ಅಂತ ಆರೋಪಿಸಿ ಪ್ರೈವೇಟ್ ಕೇಸ್ ವೊಂದು ದಾಖಲಾಗಿದೆ.

ನ್ಯಾಯವಾದಿ ಎಸ್. ಬಾಲಕೃಷ್ಣನ್ ಕೋರ್ಟ್ ಮೊರೆ ಹೋಗಿದ್ದು, ಅಕ್ರಮವಾಗಿ ಹಣ ಪಡೆದುಕೊಂಡೇ ಅನರ್ಹ ಶಾಸಕರು ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿ ಟಿಕೆಟ್ ಪಡೆದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ದೂರಿದ್ದಾರೆ.

ಅನರ್ಹ ಶಾಸಕರು ಗೆದ್ದ ಬಳಿಕ ಮಂತ್ರಿ ಮಾಡುವೆ ಎಂದಿರೋ ಸಿಎಂ ಬಿ.ಎಸ್.ಯಡಿಯೂರಪ್ಪಗೂ ಈಗ ಬಿಗ್ ಶಾಕ್ ನೀಡಿದಂತಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ