ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಎತ್ತಂಗಡಿ

ಮಂಗಳವಾರ, 11 ಏಪ್ರಿಲ್ 2017 (20:15 IST)
ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಶ್ರೀ ವತ್ಸ ಕೃಷ್ಣ ಅವರನ್ನು ಎತ್ತಂಗಡಿ ಮಾಡಿ ಕೇಂದ್ರ ಸೇವೆಗೆ ವರ್ಗಾಯಿಸಲಾಗಿದೆ.
 
 ಸಾರ್ವಜನಿಕ ಉದ್ಯಮ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶ್ರೀವತ್ಸ ಕೃಷ್ಣ ಕಡತಗಳು ಆಂಗ್ಲ ಭಾಷೆಯಲ್ಲಿರಬೇಕು ಎಂದು ಮೌಖಿಕ ಆದೇಶ ಹೊರಡಿಸಿದ್ದರು. ಕನ್ನಡ ಭಾಷೆಯಲ್ಲಿರುವ ಕಡತಗಳ ಬಗ್ಗೆ ಅಸಡ್ಡೆ ಹೊಂದಿರುವುದು ಬೆಳಕಿಗೆ ಬಂದಿತ್ತು.
 
ಇಂಗ್ಲೀಷ್‌ನಲ್ಲಿ ಕಡತ ಮಂಡಿಸದಿದ್ದರೆ ಸಹಿಹಾಕುವುದಿಲ್ಲ ಎನ್ನುವ ಬೆದರಿಕೆಯೊಡ್ಡಿದ್ದರು. ಇದೀಗ ಕೃಷ್ಣ ಅವರನ್ನು ಕೇಂದ್ರ ,ಸರಕಾರದ ಆಧೀನದಲ್ಲಿರುವ ಕಾಫಿ ಬೋರ್ಡ್‌ಗೆ ವರ್ಗಾಯಿಸಲಾಗಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ