ಜಿಲ್ಲಾ ಮಟ್ಟದ ಅಧಿಕಾರಿಗಳು ಕತ್ತೆ ಕಾಯೋಕೆ ಇದ್ದಾರಾ? ಎಂದ ಸಚಿವ

ಶನಿವಾರ, 19 ಅಕ್ಟೋಬರ್ 2019 (19:54 IST)

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದು, ನೂತನ ಸಚಿವರು ಅಧಿಕಾರಿಗಳನ್ನು ಸಮಯ ಸಿಕ್ಕಾಗಲೆಲ್ಲಾ ಹಿಗ್ಗಾ ಮುಗ್ಗಾ ಝಾಡಿಸುತ್ತಿದ್ದಾರೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಕತ್ತೆ ಕಾಯೋದಕ್ಕೆ ಇದ್ದಾರಾ? ಅಂತ ಪ್ರಶ್ನೆ ಮಾಡಿದ್ದಾರೆ.

ಕೆಡಿಪಿ ಸಭೆಗೆ ಸಹಾಯಕರು ಬಂದಿದ್ದರು. ಕೆಲವು ಇಲಾಖೆಗಳ ಮುಖ್ಯ ಅಧಿಕಾರಿಗಳು ಬಂದೇ ಇರಲಿಲ್ಲ. ಇದು ಮಾಧುಸ್ವಾಮಿ ಕೋಪಕ್ಕೆ ಕಾರಣವಾಯಿತು.

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಸಚಿವರು, ಸಹಾಯಕ ಅಧಿಕಾರಿಗಳನ್ನು ಸಭೆಯಿಂದ ಸಭೆಯಿಂದ ಹೊರಹೋಗುವಂತೆ ಎಚ್ಚರಿಕೆ ನೀಡಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ