‘ಉಪ ಚುನಾವಣೆ ನಂತರ ಬಿಜೆಪಿ ಸರಕಾರ ಇರಲ್ಲ’

ಶುಕ್ರವಾರ, 18 ಅಕ್ಟೋಬರ್ 2019 (21:07 IST)

ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿ ಇರೋದಿಲ್ಲ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿರೋ ಮಾಜಿ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ಶಾಸಕರು ಚುನಾವಣೆಯಲ್ಲಿ ಯಡಿಯೂರಪ್ಪ ಹೆಸರು ಹೇಳುತ್ತಿದ್ದರು. ಈಗ ಬಿಎಸ್ ವೈ ಹೆಸರು ಹೇಳಿದರೆ ಅವರನ್ನು ಪಕ್ಷದಿಂದ ಹೊರಗಟ್ಟುತ್ತಾರೆ ಅನ್ನೋ ಭಯದಲ್ಲಿದ್ದಾರೆ ಎಂದ್ರು.

ಇನ್ನು, ನೆರೆ ಸಂತ್ರಸ್ತರಿಗೆ ಶೀಘ್ರವೇ ಎರಡನೇ ಕಂತಿನ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಸಂಸದರಿಗೆ ಬಳೆ, ಸೀರೆ, ಕುಂಕುಮ ಕಳಿಸಲಾಗುವುದು ಅಂತ ಮತ್ತೆ ಹೇಳಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ