ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿರಾಯನ್ನ ಬಂಧನ

ಶನಿವಾರ, 11 ಫೆಬ್ರವರಿ 2023 (14:50 IST)
ವಿಚ್ಚೇದನ ಪಡೆದು ದೂರವಾಗೋಣ ಎಂದು‌ ನಿರ್ಧರಿಸಿದ್ದ ದಂಪತಿ ನಡುವೆ ಬಿರುಕು ಉಂಟಾಗಿ ಪತ್ನಿಯನ್ನು ಕೊಲೆ ಮಾಡಿದ್ದ ಪರಾರಿಯಾಗಿದ್ದ ಪತಿರಾಯನನ್ನ ವರ್ತೂರು ಪೊಲೀಸರು ಬಂಧಿಸಿದ್ದಾರೆ.ಮಜಿದ್ ಬಂಧಿತ‌ ಆರೋಪಿ. ಕೊಲ್ಕತ್ತಾ ಮೂಲದ ಮೊನಿಷ್ ಎಂಬಾಕೆಯನ್ನ ಇದೇ ತಿಂಗಳು 7ರಂದು ಆಕೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪತ್ನಿಯ ಮೇಲೆ ಸಂಶಯಪಟ್ಟು ಕೊಲೆ ಮಾಡಿರುವುದು ತನಿಖೆ ವೇಳೆ‌ ಬೆಳಕಿಗೆ ಬಂದಿದೆ.
 
ಆರು ವರ್ಷಗಳಿಂದ ಹಿಂದೆ ಮದುವೆಯಾಗಿದ್ದ ದಂಪತಿ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ವರ್ತೂರಿನ ಪಂಚಮುಖಿ‌ ದೇವಸ್ಥಾನ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.  ಮಜೀದ್  ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ವರ್ತೂರಿನಲ್ಲಿ ವಾಸವಾಗಿದ್ದರು. ಮಜೀದ್ ಟೈಲ್ಸ್ ಕೆಲಸ ಮಾಡುತ್ತಿದ್ದರೆ ಮೊನಿಷ್ ಗೃಹಿಣಿಯಾಗಿದ್ದಳು. ಇಬ್ಬರು ನಡುವೆ ಎಲ್ಲವೂ ಸರಿಯಾಗಿತ್ತು. ಕೆಲ‌‌ ದಿನಗಳ ಹಿಂದೆ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿದ್ದ. ವಿಚ್ಚೇದನ ಪಡೆಯುವ ಇಬ್ಬರು‌‌ ಮಾತನಾಡಿಕೊಂಡಿದ್ದರಂತೆ.‌ ಇದಾದ ಬಳಿಕವು ಪರಪುರುಷನೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತಪಡಿಸಿ ಆಗಾಗ ಜಗಳವಾಡುತ್ತಿದ್ದ.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ