ಏಪ್ರಿಲ್ 18, 19ರಂದು ರಾಜ್ಯದಲ್ಲಿ ವರುಣನ ಆಗಮನ: ಯೆಲ್ಲೂ ಅಲರ್ಟ್‌ ಸೂಚನೆ

Sampriya

ಬುಧವಾರ, 17 ಏಪ್ರಿಲ್ 2024 (19:02 IST)
ಬೆಂಗಳೂರು: ರಾಜ್ಯದಲ್ಲಿ ಇದೇ 18 ಹಾಗೂ 19ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಈಗಾಗಲೇ ಜನರು ಬಿಸಿಲ ತಾಪಕ್ಕೆ ಸುಸ್ತಾಗಿದ್ದು, ವರುಣನ ಆಗಮನಕ್ಕೆ ಕಾಯುತ್ತಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇದೇ 18 ಹಾಗೂ 19ರಂದು 31 ಜಿಲ್ಲೆಗಳಲ್ಲೂ ಯೆಲ್ಲೂ ಅಲರ್ಟ್ ಸೂಚಿಸಲಾಗಿದೆ.  ಪ್ರತಿ ಗಂಟೆಗೆ 30ರಿಂದ 40 ಕಿ ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.  ಈ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯವ ಮುನ್ಸೂಚನೆಯಿದೆ.

ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಕೆಲವು ಪ್ರದೇಶಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹೇಳಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ