ಕರ್ನಾಟಕಕ್ಕೂ ಅಟಲ್ ಗೂ ಅವಿನಾಭಾವ ಸಂಬಂಧ ಎಂದ ಕೇಂದ್ರ ಸಚಿವ

ಗುರುವಾರ, 23 ಆಗಸ್ಟ್ 2018 (19:47 IST)
ಕರ್ನಾಟಕಕ್ಕೂ ಅಗಲಿದ ಹಿರಿಯ ಬಿಜೆಪಿ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ  ಅವಿನಾಭಾವ ಸಂಬಂಧವಿದೆ. ಹೀಗಂತ ಕೇಂದ್ರ ಸಚಿವ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಪಶ್ಚಿಮ ವಾಹಿನಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆ ನೀಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ರಾಜ್ಯಕ್ಕೂ  ಅವಿನಾಭಾವ ಸಂಬಂಧವಿದೆ ಎಂದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಶ್ಚಿಮ ವಾಹಿನಿಯಲ್ಲಿ ಮಾತನಾಡಿದ ಅವರು,  ಕರ್ನಾಟಕದ ಉದ್ದಗಲಕ್ಕೂ ಅಟಲ್ ಸಂಚರಿಸಿದ್ದರು.

ಅಂತಹ ಮಹಾನ್ ನಾಯಕನ ಅಸ್ತಿ ಶ್ರೀರಂಗಪಟ್ಟಣ ದಲ್ಲಿ ವಿಸರ್ಜನೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನಾನು ಅಟಲ್ ಜೀ ಜೊತೆ 25 ವರ್ಷ ಕೆಲಸ ಮಾಡಿದ್ದೇನೆ. ಅವರ ಜೊತೆಗಿನ ಒಡನಾಟ ಮರಿಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ