ಗಮನ ಸೆಳೆದ ಮೀಡಿಯಾ ಸೆಮಿನಾರ್

ಸೋಮವಾರ, 6 ಆಗಸ್ಟ್ 2018 (20:09 IST)
ದಾವಣಗೆರೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಿಂದ ಮೌಲ್ಯನಿಷ್ಠ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದಡಿ 2018 ರ ಮೀಡಿಯಾ ಸೆಮಿನಾರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇವರಾಜ್ ಅರಸು ಬಡಾವಣೆಯ ವಿದ್ಯಾಲಯದಲ್ಲಿ  ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ವಿಭಾಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾಲಯದ ವಿವಿಧ ರಾಜ್ಯದ ಮೀಡಿಯಾ ವಿಭಾಗದವರು ಭಾಗವಹಿಸಿದ್ದರು.

ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಸ್ತುತ ಮಾಧ್ಯಮಗಳ ಸ್ಥಿತಿಗತಿ ಹಾಗೂ ಮಾಧ್ಯಮಗಳಿಂದ ಸಮಾಜಕ್ಕಿರುವ ಉಪಯೋಗವನ್ನು ತಿಳಿಗೊಳಿಸಿದರು. ಈ ವೇಳೆ   ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಪ್ರಶಸ್ತಿ ಪಡೆದವರಿಗೆ  ಸನ್ಮಾನಿಸಿ,  ಗೌರವಿಸಲಾಯಿತು.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ