ಮಾವನಿಗೆ ಸೇರಿದ ಅದನ್ನು ನೋಡಲು ಹೋಗಿ ಶವವಾದ ಅಳಿಯಂದ್ರು

ಭಾನುವಾರ, 18 ಆಗಸ್ಟ್ 2019 (20:38 IST)
ಮಾವನಿಗೆ ಸಂಬಂಧಿಸಿದ ಅದನ್ನು ನೋಡಲು ಹೋಗಿದ್ದ ಅವಳಿಯಂದಿರಿಬ್ಬರು ಶವವಾಗಿದ್ದಾರೆ.

ಮಾವನ ಅಂಗಡಿ ನೋಡಲು ಹೋದ ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕರು ಸಾವನ್ನಪ್ಪಿದ್ದಾರೆ.

ಶಾಂತಿನಾಥ್ ಸಮಾಜ್ (22), ಲಕ್ಷ್ಮಣ ಸಮಾಜ್ (20) ಮೃತ ದೇಹ ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳ ಬಳಿ ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದಿದ್ದ ಇಬ್ಬರು ಯುವಕರು ಇವರಾಗಿದ್ದಾರೆ.  

ಮೃತ ಶಾಂತಿನಾಥ ಮತ್ತು ಲಕ್ಷ್ಮಣ ನಸಲಾಪುರದ ನಿವಾಸಿಗಳಾಗಿದ್ದಾರೆ. ಕುಸನಾಳ ಗ್ರಾಮದಲ್ಲಿದ್ದ ಶಾಂತಿನಾಥ ಮತ್ತು ಲಕ್ಷ್ಮಣ ಮಾವನ ಅಂಗಡಿ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ನೀರು ಕಡಿಮೆಯಾದ ಹಿನ್ನಲೆ ಮಾವನ ಅಂಗಡಿಯ ಸ್ಥಿತಿ ನೋಡಿ ಬರಲು ಹೋಗಿದ್ದ ಯುವಕರು ಶವವಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ