ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಹಿನ್ನಲೆ; ರಿಜ್ವಾನ್ ಅರ್ಷದ್ ಸೋಲಿಸಲು ಬೇಗ್ ಬೆಂಬಲಿಗರಿಂದ ರಣತಂತ್ರ

ಸೋಮವಾರ, 18 ನವೆಂಬರ್ 2019 (11:04 IST)
ಶಿವಾಜಿನಗರ: ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರನ್ನು  ಸೋಲಿಸಲು ಅನರ್ಹ ಶಾಸಕ ರೋಷನ್ ಬೇಗ್ ಬೆಂಬಲಿಗರು ರಣತಂತ್ರ ರೂಪಿಸಿದ್ದಾರೆ.



ಶಿವಾಜಿನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ಕಣಕ್ಕೀಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಸೋಲಿಸಲು ರೋಷನ್ ಬೇಗ್ ಬೆಂಬಲಿಗರು ರಣತಂತ್ರ ರೂಪಿಸಿದ್ದು, ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಲು ಬೇಗ್ ಬೆಂಬಲಿಗರು ನಿರ್ಧಾರಿಸಿದ್ದಾರೆ.


ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿ ಬೇಗ್ ಬೆಂಬಲಿಗರು ಮಾತುಕತೆ  ನಡೆಸಿದ್ದು, ರಿಜ್ವಾನ್ ಅರ್ಷದ್ ಸೋತ್ರೆ ಶಿವಾಜಿನಗರದಿಂದ ಔಟ್ ಆಗ್ತಾರೆ ಬಳಿಕ ರಾಜಕೀಯ ಸ್ಥಿತಿಗತಿ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ