ಎಚ್‌ಡಿಕೆ ವಿರುದ್ಧ ಬಂಡಾಯ ಶಾಸಕ ಬಾಲಕೃಷ್ಣ ಹೊಸ ಬಾಂಬ್

ಮಂಗಳವಾರ, 1 ಆಗಸ್ಟ್ 2017 (19:59 IST)
ಮಾಜಿ ಸಿಎಂ ಎಚ್‌ಡಿಕೆ ಇನ್ನೊಂದು ಮದ್ವೆ ಬಗ್ಗೆ ಯಾರೋ ಹೇಳಿದ್ದಾರೆ. ಯಾರು ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
 
ಎಚ್‌‍ಡಿಕೆ ಇನ್ನೊಂದು ಮದುವೆಯಾಗಿ ಹೆಣ್ಣು ಮಗು ಹೆತ್ತಲ್ಲಿ ಅವರಿಗೆ ಪ್ರಧಾನಿಯಾಗುವ ಯೋಗವಿದೆ ಎಂದು ಜಾತಕದಲ್ಲಿ ಉಲ್ಲೇಖವಿರುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.
 
ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ ತಿರುಮಲೆ ಗ್ರಾಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿಗೆ ಜಾತಕದಲ್ಲಿ ಸಿಎಂ ಆಗುವ ಯೋಗವಿತ್ತಂತೆ. ಆದ್ದರಿಂದ ಸಿಎಂ ಆಗಿ ಹೋಗಿದ್ದಾರೆ. ಕುಮಾರಸ್ವಾಮಿ ಕೋಟಾ ಮುಗಿದು ಹೋಗಿದೆ. ಇದೀಗ ಬೇರೆಯವರು ಸಿಎಂ ಆಗಲಿದ್ದಾರೆ ಎಂದು ಲೇವಡಿ ಮಾಡಿದರು.
 
ದೇವೇಗೌಡರು ನನ್ನ ಬಳಿ ಮತ್ತೊಮ್ಮೆ ಪ್ರಧಾನಿಯಾಗುವ ಯೋಗವಿದೆ ಎಂದು ಹೇಳಿದ್ದರು. ಡಿ.ಕೆ.ಶಿವಕುಮಾರ್‌ಗೂ ಕೂಡಾ ಸಿಎಂ ಆಗುವ ಯೋಗವಿದೆ ಎಂದು ತಿಳಿಸಿದ್ದರು ಎಂದು ವ್ಯಂಗ್ಯವಾಡಿದರು.
 
ಜಾತಕ ನಂಬಿ ಪಿಎಂ, ಸಿಎಂ ಆಗುತ್ತೇನೆ ಎಂದರೆ ನಂಬಲು ಸಾಧ್ಯವೇ? ಕುಮಾರಸ್ವಾಮಿ ಪ್ರಧಾನಿ ಆಗ್ತಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ಹೇಳಿದ್ದಾರೆ ಎಂದು ಹೇಳುತ್ತಾ ಜೆಡಿಎಸ್ ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಸೆಳೆಯಲು ಗೌಡರ ಕುಟುಂಬ ತಂತ್ರ ರೂಪಿಸಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ