ಮನಮೋಹನ್ ಸಿಂಗ್ ಕನ್ನಡದವರಾ, ಬೆಂಗಳೂರು ವಿವಿಗೆ ಅವರ ಕೊಡುಗೆ ಏನು: ಆಕ್ರೋಶ
ಅವರ ಸ್ಮರಣಾರ್ಥವಾಗಿ ಈಗ ರಾಜ್ಯ ಸರ್ಕಾರ ಬೆಂಗಳೂರು ವಿವಿಗೆ ಅವರ ಹೆಸರಿಡಲು ನಿರ್ಧಾರ ಮಾಡಿದೆ. ಇದನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.
ಈ ಹಿಂದೆ ಯಲಹಂಕ ಮೇಲ್ಸೇತುವೆಗೆ ಬಿಜೆಪಿ ಸರ್ಕಾರ ವೀರ ಸವಾರ್ಕರ್ ಹೆಸರು ನಾಮಕರಣ ಮಾಡಲು ಹೊರಟಾಗ ಕಾಂಗ್ರೆಸ್ ವಿರೋಧಿಸಿತ್ತು. ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರು, ಐತಿಹಾಸಿಕ ವ್ಯಕ್ತಿಗಳು ಯಾರೂ ಇಲ್ವೇ ಎಂದು ಪ್ರಶ್ನೆ ಮಾಡಿತ್ತು. ಹಾಗಿದ್ದರೆ ಈಗ ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಕೊಡುಗೆ ಏನು? ಅವರು ಕನ್ನಡಿಗರಾ? ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.