ಬಸವರಾಜ್‌ ಸಿಂಧೂರಗೆ ಟಿಕೆಟ್​ ಕೊಡಿಸ್ತಾರಾ BSY?

ಶನಿವಾರ, 8 ಏಪ್ರಿಲ್ 2023 (16:10 IST)
ಮಾಜಿ ಸಿಎಂ B.S. ಯಡಿಯೂರಪ್ಪ BJP ಏಳ್ಗೆಗಾಗಿ ಅವಿರತ ಪ್ರಯತ್ನ ಪಟ್ಟವರು. ಅವರ ಮಾತನ್ನ BJPಯಲ್ಲಿ ಯಾರೂ ಅಲ್ಲಗಳೆಯುವುದಿಲ್ಲ.. ಕಳೆದ ಬಾರಿಯ ಎಲೆಕ್ಷನ್‌ನಲ್ಲಿ ಬಾಗಲಕೋಟೆಯ ಜಮಖಂಡಿ ಕ್ಷೇತ್ರಕ್ಕೆ ಬಸವರಾಜ್‌ ಸಿಂಧೂರಗೆ BJP ಹೈಕಮಾಂಡ್​​ ಟಿಕೆಟ್​​​ ನೀಡದೇ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ನೀಡಿತ್ತು.. ಇದರಿಂದ ಬಸವರಾಜ್‌ ಸಿಂಧೂರ ಮುನಿಸಿಕೊಂಡಿದ್ರು.. ಆದರೆ ಮುಂದಿನ ಬಾರಿ ನಿಮಗೆ ಟಿಕೆಟ್​ ಪಕ್ಕಾ ಕೊಡಿಸುವೆ ಎಂದು ರಾಜಾಹುಲಿ BSY ಭರವಸೆ ನೀಡಿ, ಮನವೊಲಿಸಿದ್ರು.. ಇದೀಗ ಜಮಖಂಡಿ ಕ್ಷೇತ್ರಕ್ಕೆ ಬಸವರಾಜ್​ ಸಿಂಧೂರ ಟಿಕೆಟ್‌ ಬೇಡಿಕೆ ಇಟ್ಟಿದ್ದು, ಇದೀಗ ಕೊಟ್ಟ ಮಾತಿನಿಂತೆ ಯಡಿಯೂರಪ್ಪ ಬಸವರಾಜ್​​ ಸಿಂಧೂರರಿಗೆ ಟಿಕೆಟ್​ ಕೊಡಿಸ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.. ಈ ಬಾರಿ ಕೇಂದ್ರ ಬಿಜೆಪಿ ಚುನಾವಣೆ ಸಮಿತಿಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಇದ್ದು, ಬಸವರಾಜ್​​ ಸಿಂಧೂರಗೆ ಟಿಕೆಟ್​ ಸಿಗುತ್ತಾ ಎಂಬುದು ಚರ್ಚೆಯ ವಿಷಯವಾಗಿದೆ. ಸದ್ಯ ಜಮಖಂಡಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಸವರಾಜ್ ಸಿಂಧೂರ, ಜಗದೀಶ ಗುಡಗುಂಟಿ, ಉಮೇಶ ಮಹಾಬಳಶೆಟ್ಟಿ ಮಧ್ಯೆ ತೀವ್ರ ಪೈಪೋಟಿ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ