ಅಂದು ಗೌರವ ... ಇಂದು ಬೈಗುಳ: ಸಿಎಂ ಹಾಸ್ಯ ಚಟಾಕಿ

ಬುಧವಾರ, 30 ಆಗಸ್ಟ್ 2017 (18:23 IST)
ಹಿಂದೆ ರಾಜ್ಯದ ಜನತೆ ಮಹಾರಾಜರಿಗೆ ಗೌರವ ನೀಡುತ್ತಿದ್ದರು. ಇಂದು ಜನತೆ ನಮ್ಮನ್ನು ಬೈಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಸ್ಯಚಟಾಕಿ ಹಾರಿಸಿದ್ದಾರೆ.
ಮೈಸೂರಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಮಹಾರಾಜರು ಬರುತ್ತಾರೆಂದರೆ ಜನತೆ ದೂರ ನಿಂತು ಕೈ ಮುಗಿದು ಗೌರವ ಸಲ್ಲಿಸುತ್ತಿದ್ದರು. ಆದರೆ, ಇಂದು ನಮ್ಮನ್ನು ನೋಡಿದರೆ ಜನರು ಬೈಯುತ್ತಾರೆ ಎಂದರು.
 
ಅಂದು ಅವರು ಮಹಾರಾಜರಾಗಿದ್ದರಿಂದ ಗೌರವ ಸಲ್ಲಿಸುತ್ತಿದ್ದರು. ನಾವು ಜನಪ್ರತಿನಿಧಿಗಳಾಗಿದ್ದರಿಂದ ಜನತೆ ನಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಎಂದು ಹಾಸ್ಯವಾಗಿ ನುಡಿದರು.
 
ರಾಜಕಾರಣಿಗಳು ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಿದಾಗ ಮಾತ್ರ ಜನತೆ ಗೌರವ ಕೊಡುತ್ತಾರೆ. ಇಲ್ಲವಾದಲ್ಲಿ ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ