ವಿಮ್ಸ್‌ಗೆ ಸಚಿವ ಸಂತೋಷ್ ಲಾಡ್ ಭೇಟಿ: ಅವ್ಯವಸ್ಥೆ ನೋಡಿ ಅಧಿಕಾರಿಗಳಿಗೆ ತರಾಟೆ

ಶನಿವಾರ, 2 ಜುಲೈ 2016 (10:47 IST)
ಬಳ್ಳಾರಿ ನಗರದ ವಿಜಯನಗರ ವಿಮ್ಸ್ ಆಸ್ಪತ್ರೆಗೆ ದಿಢೀರ ಭೇಟಿ ನೀಡಿರುವ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಆಸ್ಪತ್ರೆಯ ಅವ್ಯವಸ್ಥೆ ಕಂಡು ವಿಮ್ಸ್ ನಿರ್ದೇಶಕ ವಿ.ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.
 
ಏನ್ರಿ ಇದು ಆಸ್ಪತ್ರೆನಾ ಯಾವೊಬ್ಬ ರೋಗಿಗಳಿಗೂ ಔಷಧಿ ಕೊಟ್ಟಿಲ್ವಂತೆ. ರೋಗಿಗಳು ಎಲ್ಲಾ ತರಹದ ಔಷಧಿಗಳನ್ನು ಹೊರಗಿನಿಂದ ತರುತ್ತಾರಂತೆ. ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ನಿಮಗೇನಾದರು ಮಾನವೀಯತೆ ಇದಿಯಾ? ಎಂದು ಸಚಿವರು ಆಸ್ಪತ್ರೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
 
ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ನಿರ್ದೇಶಕರ ಉತ್ತರಕ್ಕೆ ಕೋಪಕೊಂಡ ಸಚಿವ ಸಂತೋಷ್ ಲಾಡ್, ನೀವು ಏನು ಸುಧಾರಣೆ ಕೈಗೊಂಡಿದ್ದೀರಿ ಎನ್ನುವುದ ಕಣ್ಣ ಮುಂದೆ ಕಾಣುತ್ತಿದೆ. ರೋಗಿಗಳಿಗೆ ಮಲಗಲು ಸರಿಯಾದ ಹಾಸಿಗೆ ವ್ಯವಸ್ಥೆ ಇಲ್ಲ. ಅವರಿಗೆ ಬೆಡ್‌ಶೀಟ್ ಇಲ್ಲದೆ ಹಾಗೆ ಮಲಗಿಸಿದ್ದೀರಿ. ಇದ್ದಕ್ಕೆ ನಾನೇ ಪರಿಹಾರ ನೀಡಬೇಕಾ ಅಥವಾ ನೀವೆ ವ್ಯವಸ್ಥೆಗಳನ್ನು ಸರಿಪಡಿಸುತ್ತಿರಾ ಎಂದು ಖಡಕ್ ಆಗಿ ತರಾಟೆಗೆ ತೆಗೆದುಕೊಂಡರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ