ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ನಿರ್ದೇಶಕರ ಉತ್ತರಕ್ಕೆ ಕೋಪಕೊಂಡ ಸಚಿವ ಸಂತೋಷ್ ಲಾಡ್, ನೀವು ಏನು ಸುಧಾರಣೆ ಕೈಗೊಂಡಿದ್ದೀರಿ ಎನ್ನುವುದ ಕಣ್ಣ ಮುಂದೆ ಕಾಣುತ್ತಿದೆ. ರೋಗಿಗಳಿಗೆ ಮಲಗಲು ಸರಿಯಾದ ಹಾಸಿಗೆ ವ್ಯವಸ್ಥೆ ಇಲ್ಲ. ಅವರಿಗೆ ಬೆಡ್ಶೀಟ್ ಇಲ್ಲದೆ ಹಾಗೆ ಮಲಗಿಸಿದ್ದೀರಿ. ಇದ್ದಕ್ಕೆ ನಾನೇ ಪರಿಹಾರ ನೀಡಬೇಕಾ ಅಥವಾ ನೀವೆ ವ್ಯವಸ್ಥೆಗಳನ್ನು ಸರಿಪಡಿಸುತ್ತಿರಾ ಎಂದು ಖಡಕ್ ಆಗಿ ತರಾಟೆಗೆ ತೆಗೆದುಕೊಂಡರು.